ದೇಶಭಕ್ತ, ಸ್ವಾಂತಂತ್ರ್ಯಯೋಧ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ರಾಯಣ್ಣನ ಪರಮ ಭಕ್ತ ಆನಂದ್ .ಬಿ. ಅಪ್ಪುಗೋಳ ಅವರು ಭಕ್ತಿಯಿಂದ ನಿರ್ಮಿಸಿರುವ ಈ ಚಿತ್ರದಲ್ಲಿ ಬರುವ ಯುಗಳ ಗೀತೆಯ ಬಗ್ಗೆ ಜಯ ಕರ್ನಾಟಕ ಸಂಘಟನೆಯು ವಿರೋಧ ವ್ಯಕ್ತ ಪಡಿಸುತ್ತಿರುವುದರಿಂದ ಈ ಮೂಲಕ ಸ್ಪಷ್ಟನೆ ಏನೆಂದರೆ:-
ಹಲವರು ವಿರೋಧಿಸುವಂತೆ ಸ್ವತಃ ರಾಯಣ್ಣ ಯುಗಳ ಗೀತೆಯನ್ನು ಹಾಡುವುದಿಲ್ಲ. ರಾಯಣ್ಣನ ಶೌರ್ಯ ಪರಾಕ್ರಮಗಳನ್ನು ನೋಡಿ, ಸಿಕ್ಕರೆ ನನಗಿಂತಹ ಗಂಡ ಸಿಗಬೇಕೆಂದು ಒಂದು ಹೆಣ್ಣು ಕಲ್ಪಿಸಿಕೊಳ್ಳುತ್ತಾಳೆ. . . ಅಷ್ಟೇ ವಿನಃ ರಾಯಣ್ಣನ ದೇಶಪ್ರೇಮವನ್ನಷ್ಟೇ ಈ ಚಿತ್ರದಲ್ಲಿ ತೋರಿಸಿದ್ದೇವೆ . ಆದ್ದರಿಂದ ಯಾವ ಕನ್ನಡಿಗರಿಗಾಗಲಿ, ದೇಶಭಕ್ತರಿಗೆ ಆಗಲಿ, ರಾಯಣ್ಣನ ಭಕ್ತರಿಗೆ ಆಗಲಿ ನೋವುಂಟು ಮಾಡುವ ಉದ್ದೇಶದಿಂದ ಹಾಡನ್ನು ಚಿತ್ರಿಸಿಲ್ಲ. ತಮ್ಮಲ್ಲಿ ಆ ರೀತಿಯ ಭಾವನೆ ಮೂಡಿ ನೋವುಂಟಾಗಿದ್ದಲ್ಲಿ ದಯವಿಟ್ಟು ಕ್ಷಮಿಸಿ.
ನಮ್ಮ ಈ ಕನ್ನಡನಾಡಿನ, ಕ್ರಾಂತಿವೀರನ ಚಿತ್ರಕ್ಕೆ ತಾವುಗಳು ಸಹಕಾರ ನೀಡಿ, ರಾಯಣ್ಣನ ದೇಶಭಕ್ತಿ, ನಾಡಪ್ರೇಮ, ನಿಸ್ವಾರ್ಥ ಸೇವೆ ನಾಡಿನ ಮನೆಮನೆಗೂ ಜನರ ಮನ ಮನಗಳಿಗೂ ತಲುಪಿಸಲು ತಮ್ಮ ಸಹಕಾರ ಅತ್ಯಮೂಲ್ಯ
ತಮ್ಮ ಸಹಕಾರದ ನಿರೀಕ್ಷೆಯೊಂದಿಗೆ,